ಮೂರು ದಿನದ ಜೆಡಿಎಸ್ ಪಾದಯಾತ್ರೆ ಎರಡೇ ದಿನಕ್ಕೆ ಮೊ ಟುಕು

ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ನ ಮೂರು ದಿನಗಳ ಪಾದಯಾತ್ರೆಯ ಎರಡನೇ ದಿನವಾದ ಇಂದು, ಆಗಸ್ಟ್ 10ರಂದು, ಕಣಮಿಣಿಕೆ ಟೋಲ್ ಪ್ಲಾಜಾ ಬಳಿ ಪೊಲೀಸರು ಪಾದಯಾತ್ರೆಯನ್ನು ತಡೆದಿದ್ದಾರೆ. ಕಾನೂನು ಸುವ್ಯವಸ್ಥೆಯ ಕಾರಣವನ್ನು ಪೊಲೀಸರು ಉಲ್ಲೇಖಿಸಿದರೆ, ಸರ್ಕಾರದ ಒತ್ತಡದಿಂದ ತಡೆಹಿಡಿಯಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ನೇತೃತ್ವದ ಪಾದಯಾತ್ರೆ ಬಿಜಿಎಸ್ ವೃತ್ತದಿಂದ ಆರಂಭವಾಗಿ ಬೈರಮಂಗಲ ಕ್ರಾಸ್, ಬಿಲ್ಲಕೆಂಪನಹಳ್ಳಿ ಗೇಟ್, ಬಂಗ್ಲೆ, ಲಕ್ಷ್ಮೀ ಸಾಗರ ಮತ್ತು ಮಂಚನಾಯಕನಹಳ್ಳಿ ಮಾರ್ಗವಾಗಿ ಸಾಗುತ್ತಿತ್ತು.
ಪೊಲೀಸ್ ಬ್ಯಾರಿಕೇಡ್ಗಳನ್ನು ದಾಟಲು ಕಾರ್ಯಕರ್ತರು ಮುಂದಾದರೂ, ಕಾನೂನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಹೇಳಿ ಜೆಡಿಎಸ್ ಪಾದಯಾತ್ರೆಯನ್ನು ಇಂದು ಶಾಂತಿಯುತವಾಗಿ ಸ್ಥಗಿತಗೊಳಿಸಿದೆ.
ಪಾದಯಾತ್ರೆಯನ್ನು ಆಗಸ್ಟ್ 18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮತ್ತಷ್ಟು ದೊಡ್ಡ ಪ್ರತಿಭಟನೆಯಾಗಿ ಮುಂದುವರಿಸುವುದಾಗಿ ನಿಖಿಲ್ ಕುಮಾರಸ್ವಾಮಿ ಘೋಷಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ಬಿಡದಿ ಟೌನ್ಶಿಪ್ ಯೋಜನೆಯನ್ನು ರದ್ದುಗೊಳಿಸಿ ರೈತರ ಭೂಮಿಯನ್ನು ಉಳಿಸಬೇಕು ಎಂಬುದು ಜೆಡಿಎಸ್ನ ಪ್ರಮುಖ ಬೇಡಿಕೆಯಾಗಿದೆ.
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, ಈ ಹೋರಾಟ ರೈತರಿಗೆ ನ್ಯಾಯ ದೊರಕಿಸುವುದರ ಜೊತೆಗೆ ಕಾಂಗ್ರೆಸ್ ಸರ್ಕಾರದ ವಿರುದ್ಧದ ರಾಜ್ಯವ್ಯಾಪಿ ಹೋರಾಟಕ್ಕೆ ತಿರುವಾಗಲಿದೆ ಎಂದು ಹೇಳಿದ್ದಾರೆ
